Posts

ತ್ರಿಕೂಟೇಶ್ವರ ದೇವಸ್ಥಾನ.ಗದಗ

 🔯 ನಮ್ಮ ಸನಾತನ ಸಂಸ್ಕೃತಿ.📖🔯 *ತ್ರಿಕೂಟೇಶ್ವರ ದೇವಸ್ಥಾನ.ಗದಗ.* ತ್ರಿಕೂಟೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಸ್ಥಾನವು ಹುಬ್ಬಳ್ಳಿ-ಧಾರವಾಡ ದಿಂದ ಆಗ್ನೇಯ ದಿಕ್ಕಿನಲ್ಲಿ ೫೦ ಕಿ.ಮೀ ದೂರದ ಗದಗ ಪಟ್ಟಣದಲ್ಲಿದೆ,ಇಲ್ಲಿ ಒಂದೇ ಕಲ್ಲಿನ ಮೇಲೆ ಮೂರು ಲಿಂಗಗಳನ್ನು ಅಳವಡಿಸಲಾಗಿದೆಯಲ್ಲದೆ ಈ ದೇವಸ್ಥಾನದಲ್ಲಿ ಸರಸ್ವತಿಗೆ ಸಮರ್ಪಿತವಾದ ಒಂದು ದೇಗುಲವಿದೆ. ಅದರಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ. ವಾಸ್ತುಶಿಲ್ಪ. ಈ ದೇವಾಲಯದ ವಾಸ್ತುಶಿಲ್ಪವನ್ನು  ಅಮರಶಿಲ್ಪಿ ಜಕಣಾಚಾರಿ ಯೋಜಿಸಿದ್ದಾರೆ. ಬಾದಾಮಿಯ ಚಾಲುಕ್ಯರು ದಕ್ಷಿಣದ ಆರಂಭಿಕ ವಾಸ್ತುಶಿಲ್ಪದ ಪ್ರವರ್ತಕರು. ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲು ಅವರ ಕಲಾಕೇಂದ್ರಗಳಾಗಿದ್ದವು. ಅವರ ನಂತರ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರು ಆಳಿದರು . ದೇವಾಲಯವು ಸಂಕೀರ್ಣವಾದ ಶಿಲ್ಪಕಲೆಯೊಂದಿಗೆ ಅಲಂಕೃತ ಕಂಬಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಮೂರು ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯದಲ್ಲಿ ನಾವು ಕಲ್ಲಿನ ಪರದೆಗಳನ್ನು, ಕೆತ್ತಿದ ಪ್ರತಿಮೆಗಳನ್ನು ನೋಡಬಹುದು. ತ್ರಿಕುಟೇಶ್ವರ ದೇವಾಲಯದ ಸಂಕೀರ್ಣದಲ್ಲಿ ಸುಂದರ ಕೆತ್ತನೆಯ ಕಲ್ಲಿನ ಸ್ತಂಭಗಳಿರುವ ಸರಸ್ವತಿಯ ದೇಗುಲವೂ ಇದೆ. ಬಾಲ್ಕನಿಯ ಆಸನಗಳಂತೆ ಇಳಿಜಾರಾದ ಚಪ್ಪಡಿಗಳನ್ನು ಸಾಂಕೇತಿಕ ಫಲಕಗಳಿಂದ ಅಲಂಕರಿಸಲಾಗಿದ್ದು, ಕಡಿದಾದ ಇಳಿಜಾರಾದ ಸೂರುಗಳ ನಿರ್ಮಾಣವಿದೆ. ಸಭಾಂಗಣದ ಒಳಗೆ,...

ಜೀವನ ಎಂದರೆ ಇಷ್ಟೆಯೇ

 🔯 ನಮ್ಮ ಸನಾತನ ಸಂಸ್ಕೃತಿ.📖🔯 *ಜೀವನ ಎಂದರೆ ಇಷ್ಟೆಯೇ?* ಪ್ರಪಂಚ ಸ್ಥಿರವಲ್ಲ, ಶಾಶ್ವತವಲ್ಲ. ನಾವೇ ಶಾಶ್ವತವಾಗಿ ಇಲ್ಲಿರಲೂ ಸಾಧ್ಯವಿಲ್ಲ...! ಆದರೆ ಇಂತಹ ಸ್ಥಿರವಲ್ಲದ, ಶಾಶ್ವತವಲ್ಲದ ಪ್ರಪಂಚದಲ್ಲಿ ನಮ್ಮ ಮನೆ, ಹೊಲ, ಗದ್ದೆ, ತೋಟ, ಬ್ಯಾಂಕ್ ಬ್ಯಾಲೆನ್ಸ್, ಶೇರು, ವ್ಯಾಪಾರ, ವ್ಯವಹಾರ, ಉದ್ದಿಮೆ, ನೌಕರಿ... ಇತ್ಯಾದಿ ಎಲ್ಲದರಲ್ಲೂ ಸ್ಥಿರವಾಗಿರಬೇಕೆಂದು ಬಯಸುತ್ತೇವೆ, ಇದು ವ್ಯವಸ್ಥಿತವಾಗಿ ಶಾಶ್ವತವಾಗಿ ಹೀಗೆಯೇ ಇರಲೆಂದು ಅಪೇಕ್ಷಿಸುತ್ತೇವೆ. ಇವುಗಳಲ್ಲಿ ಕೊಂಚ ಏರುಪೇರಾದರೂ ನಮಗೆ ದಿಗಿಲು, ಒಳಗೆ ಒತ್ತಡ. ಅಸ್ಥಿರ, ಅಶಾಶ್ವತ ಪ್ರಪಂಚದಲ್ಲಿ ಸ್ಥಿರವಾದ್ದನ್ನು, ಶಾಶ್ವತವಾದ್ದನ್ನು ಹುಡುಕುತ್ತೇವಲ್ಲ..! ನಮ್ಮಂತಹ ಭ್ರಮಿತರು ಇನ್ಯಾರು ಇರಲಿಕ್ಕಿಲ್ಲ. ತಪ್ಪಲ್ಲ, ಆದರೆ ಒಪ್ಪೂ ಅಲ್ಲ. ನಾವು ಇಲ್ಲಿಯೇ ಶಾಶ್ವತವಾಗಿ ಉಳಿಯಲು ಬಂದಿಲ್ಲ ಎಂಬ ಅರಿವಿರಬೇಕು. ಅಂಟಿಕೊಳ್ಳಬಾರದು ಪ್ರಪಂಚಕ್ಕೆ. ತಾವರೆಯ ಎಲೆಯ ಮೇಲಿನ ನೀರ ಹನಿಯಂತಿರಬೇಕು, ಅಂಟಿಯೂ ಅಂಟದಂತೆ. ನಾವು ಕಟ್ಟಿಕೊಂಡ ಕನಸುಗಳು, ಭ್ರಮೆಗಳು, ಆಸೆ ಆಕಾಂಕ್ಷೆಗಳು ನುಚ್ಚು ನೂರಾಗಲು ಎಷ್ಟರ ಸಮಯ..!? ಹೀಗೆ ಅಲುಗಾಡಿಸಿ ಬಿಸಾಕಿಬಿಟ್ಟರಾಯ್ತು ನಾವು ನಿಂತ ನೆಲವನ್ನು. ಈಚೆಗೆ ನೋಡಿದೆವಲ್ಲ ಕೇರಳ, ಕೊಡಗು, ಉತ್ತರ ಕರ್ನಾಟಕದಲ್ಲಿ ಆದ ಜಲಪ್ರಳಯ, ಭೂಕುಸಿತಗಳನ್ನು. ಹಿಂದೆ ಜಪಾನು, ಇಂಡೋನೇಷ್ಯಾ ಮತ್ತಿತರ ದೇಶಗಳಲ್ಲಾದ ತ್ಸುನಾಮಿ, ಚಂಡಮಾರುತ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳನ್...

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

 🔯 ನಮ್ಮ ಸನಾತನ ಸಂಸ್ಕೃತಿ.📖🔯 ‌ ‌  *ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು* ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ. ಹದಿನಾರು ದಿನಗಳ ಈ ಪಿತೃ ಪಕ್ಷದ ಅವಧಿಯಲ್ಲಿ ಮೃತರ ಆತ್ಮಕ್ಕೆ ನೆಮ್ಮದಿ ಸಿಗಲಿ, ಅವರ ಪುನರ್ಜನ್ಮ ಮತ್ತು ಶಾಶ್ವತವಾಗಿ ಈ ವಿಶ್ವದಿಂದ ಮುಕ್ತ ಹರಿವಿಗೆ ತರ್ಪಣವನ್ನು ನೀಡುವುದು ಪದ್ಧತಿ. ಈ ಸಮಯದಲ್ಲಿ ತಪ್ಪದೇ ನಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವುದು ಕಡ್ಡಾಯ. ಮಹಾಲಯ ಅಮಾವಾಸ್ಯೆಯ ಮಹತ್ವ ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ. ಹಿರಿಯರನ್ನು ನೆನದು ಅವರಿಗೆ ಪೂಜಿಸಿ ತರ್ಪಣ ಬಿಡುವ ಈ ಪಿತೃಪಕ್ಷದ ಮಹತ್ವ ಏನು, ಇದರ ಬಗ್ಗೆ ನೀವು ತಿಳಿಯಲೇಬೇಕಾದ ಕೆಲವು ಪ್ರಮುಖ ಸಂಗತಿಗಳು: 1. *ಪಕ್ಷ ಎಂದರೇನು ?* ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ 15 ದಿನಗಳ ಈ ಕಾಲವನ್ನು 'ಪಿತೃ ಪಕ್ಷ' 'ಪಕ್ಷಮಾಸ' ಎನ್ನುತ್ತಾರೆ. ಯಾರು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದ ಆಶೀರ್ವಾದ ಮಾಡುತ್ತಾರೆ, ಮಾಡದವರಿಗೆ ಶಾಪವನ್ನು ನ...

ಇಂತಹ ತಪ್ಪು ಮಾಡಿದರೆ ಪೂರ್ವಿಕರ ಆಗ್ರಹ‌ ಖಚಿತ

 🔯 ನಮ್ಮ ಸನಾತನ ಸಂಸ್ಕೃತಿ.📖🔯 ‌ ‌ ‌ ‌ ‌ ‌ *ಇಂತಹ ತಪ್ಪು ಮಾಡಿದರೆ ಪೂರ್ವಿಕರ ಆಗ್ರಹ‌ ಖಚಿತ* ಪೂರ್ವಜರ ಆಶೀರ್ವಾದ ಯಾವಾಗಲೂ ಇರಬೇಕು. ದೇವರ ಜೊತೆ ಅವರ ಆಶೀರ್ವಾದ ಸೇರಿದರೆ ಮಾತ್ರ ಕೆಲಸ ಸುಲಭವಾಗುತ್ತದೆ. ಆದರೆ, ಅನೇಕರು ಪಿತೃಗಳನ್ನು ಮರೆತಿರುತ್ತಾರೆ. ಸರಿಯಾದ ಕ್ರಮದಲ್ಲಿ ಶ್ರಾದ್ಧ, ಪಿಂಡದಾನ ಮಾಡದೆಯೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ.  ಪಿತೃ ಪಕ್ಷದಲ್ಲಿ ಪಿತೃಗಳನ್ನು ನೆನೆಯುವುದು ಬಹಳ ಮಹತ್ವ ಪಡೆಯುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಗೌರವ ನೀಡಲಾಗುತ್ತದೆ. ಪಿತೃ ಪಕ್ಷದ ಅಮಾವಾಸ್ಯೆಯಂದು ಸರ್ವ ಪಿತೃ ಪಿಂಡ ದಾನ ಹಾಗೂ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದ ಪ್ರತಿ ದಿನವೂ ಪಿತೃಗಳಿಗೆ ಅರ್ಪಿತವಾಗಿದೆ. ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸದಾ ಸುಖ, ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಆದರೆ ಪೂರ್ವಜರು ಕೋಪಗೊಂಡರೆ ಸಮಸ್ಯೆ ಎದುರಾಗುತ್ತದೆ. ಪಿತೃ ದೋಷ ಉಂಟಾದರೆ ವಂಶದ ಎಲ್ಲಾ ಪೀಳಿಗೆಯ ಜನರು ನರಳಬೇಕಾಗುತ್ತದೆ. ಪಿತೃ ದೋಷವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪಿತೃ ಪಕ್ಷದಲ್ಲಿ ಭೂಮಿಗೆ ಬರುವ ಪೂರ್ವಜರು ಕೋಪಗೊಂಡಿರುವ ಬಗ್ಗೆ ಕೆಲ ಸೂಚನೆಯನ್ನು ನೀಡುತ್ತಾರೆ.  *ಪಿತೃ ದೋಷಕ್ಕೆ ಕಾರಣಗಳು :*       ‌ ...

ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ?

 🔯 ನಮ್ಮ ಸನಾತನ ಸಂಸ್ಕೃತಿ.📖🔯 ‌ ‌ ‌ *ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ?* ಚಾಂದ್ರಮಾನ ಕಾಲ ಗಣನೆ ಪದ್ಧತಿಯಲ್ಲಿ ಒಂದು ತಿಂಗಳ ಎರಡು 15 ದಿನಗಳ ಅವಧಿಗಳನ್ನು ಪಕ್ಷ ಎಂದು ಕರೆಯುತ್ತಾರೆ. ಪೂರ್ಣಿಮೆಯಲ್ಲಿ ಕೊನೆಗೊಳ್ಳುವ ಅವಧಿಯು ಶುಕ್ಲ ಪಕ್ಷ ಎಂದೂ ಅಮಾವಾಸ್ಯೆಯಲ್ಲಿ ಕೊನೆಗೊಳ್ಳುವ ಅವಧಿಯು ಕೃಷ್ಣ ಪಕ್ಷ ಎಂದೂ ಕರೆಯಲ್ಪಡುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷಕ್ಕೆ ಪಿತೃ ಪಕ್ಷ ಎಂದು ಹೆಸರು ಮತ್ತು ಈ ಪಕ್ಷದ ಅಮಾವಾಸ್ಯೆಯು ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಟ್ಟು ಉಳಿದ ಅಮಾವಾಸ್ಯೆಗಳಿಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ. *ಏಕೆ ಈ 15 ದಿನಗಳನ್ನೇ ಪಿತೃಪಕ್ಷ ಎನ್ನುತ್ತಾರೆ ಮತ್ತು ಈ ಪಿತೃ ಪಕ್ಷಕ್ಕೆ ಏಕೆ ಇಷ್ಟು ಮಹತ್ವ ?* ಇದಕ್ಕೆ ಎರಡು ಕಾರಣಗಳಿವೆ: ಈ ಪಕ್ಷದಲ್ಲಿಆಚರಿಸುವ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಒಂದು ಮಹತ್ವವುಂಟು. *ಪಂಚ ಮಹಾಯಜ್ಞ ಎಂದರೇನು ?* ಮಹರ್ಷಿ ಸಂಸ್ಕೃತಿಯಲ್ಲಿ ಭಗವಂತನನ್ನು ಆರಾಧಿಸುವ ವಿಧಾನಗಳಲ್ಲಿ ನೇರವಾಗಿ ಭಗವಂತನನ್ನೇ ಆರಾಧಿಸುವುದು ಒಂದು ಬಗೆಯಾದರೆ, ಅವನ ಅನುಗ್ರಹ ನಮ್ಮವರೆವಿಗೆ ಹರಿದು ಬರುವ ದ್ವಾರಗಳನ್ನು ಆರಾಧಿಸಿ ತನ್ಮೂಲಕ ನಮ್ಮ ಆರಾಧನೆ ಭಗವಂತನಿಗೆ ತಲಪುವ ಹಾಗೆ ಮಾಡುವುದು ಮತ್ತೊಂದು ವಿಧಾನ. ಈ ಎರಡನೆಯ ವಿಧಾನದಲ್ಲಿ, ಮನುಷ್ಯನ ಪೋಷಣೆ, ರಕ...

ಶಾಸ್ತ್ರೋಕ್ತ ಸಂಪ್ರದಾಯಗಳು

🔯 ನಮ್ಮ ಸನಾತನ ಸಂಸ್ಕೃತಿ 📖🔯 *ಶಾಸ್ತ್ರೋಕ್ತ ಸಂಪ್ರದಾಯಗಳು* ಕೆಲವು ವೈದಿಕ (ಶಾಸ್ತ್ರೋಕ್ತ ) ಭಾರತೀಯ ಅತ್ಯಮೂಲ್ಯ  ಆರೋಗ್ಯ ಸಲಹೆಗಳು ಮತ್ತು ಸಂಸ್ಕೃತದಲ್ಲಿನ ಉಲ್ಲೇಖಗಳು... *1 ಅಜೀರಣೀ ಭೋಜನಂ ವಿಷಮ್* . ಮೊದಲು ತಿಂದ ಆಹಾರ ಜೀರ್ಣವಾಗದೆ ಇರುವಾಗ, ಮುಂದಿನ ಆಹಾರ ತಿಂದಲ್ಲಿ, ಅದು ವಿಷದಂತೆ ಪರಿಣಾಮ ಬೀರುತ್ತದೆ.  *2 ಅರ್ಧೋಗಹರಿ ನಿದ್ರಾ* ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ. *3. ಮುದ್ಗಧಾಲಿ ಗಾಧವ್ಯಾಲಿ* ಎಲ್ಲಾ ದ್ವಿದಳ ಧಾನ್ಯಗಳಲ್ಲಿ, ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಒಂದು ಅಥವಾ ಇನ್ನೊಂದು ಅಡ್ಡ ಪರಿಣಾಮಗಳನ್ನು ಹೊಂದಿವೆ. *4. ಬಗ್ನಾಸ್ತಿ ಸಂಧಾನಕರೋ ರಸೋನಹ* ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ... *5 ಅತಿ ಸರ್ವತ್ರ ವರ್ಜಯೇತ್* ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ... *6. ನಾಸ್ತಿಮೂಲಂ ಅನೌಷಧಂ* ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ... *7 ನಾ ವೈದ್ಯಃ ಪ್ರಭುರಾಯುಷ* ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ... *8. ಚಿಂತಾ ವ್ಯಾಧಿ ಪ್ರಕಾಶಯ* ಚಿಂತೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ... *9. ವ್ಯಾಯಮಾಶ್ಚ ಸನೈಹಿ ಸನೈಹಿ* ಯಾವುದೇ ವ್ಯಾಯಾಮವನ್ನು ನಿಧಾನವಾಗಿ ಮಾಡಿ. ವೇ...